ಜಂಬೆ(Xylia Xylocarpa)ಭಾರತ,ಮ್ಯಾನ್ಮಾರ್,ಕಾಂಬೋಡಿಯಾಮತ್ತು ಥೈಲ್ಯಾಂಡ್ ದೇಶಗಳಲ್ಲಿ ವ್ಯಾಪನೆ ಇರುವ ಮರ.ಕರ್ನಾಟಕದಲ್ಲಿ ಪರ್ಣಪಾತಿಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಇದು ಲೆಗುಮಿನೋಸೆ ಕುಟುಂಬದ ಮಿಮೋಸಿಯೆ ಉಪ ಕುಟುಂಬದಲ್ಲಿದೆ.ಸಸ್ಯಶಾಸ್ಟ್ರೀಯ ಹೆಸರು ಕ್ಸೈಲಿಯ ಕ್ಸೈಲೋಕಾರ್ಪ ಎಂದಾಗಿದೆ.ತುಳು ಬಾಷೆಯಲ್ಲಿ 'ತಿರುವೆ' ಎಂದು ಕರೆಯುತ್ತಾರೆ.Iron wood ಕೆಲವು ಕಡೆ ಕರೆಯುತ್ತಾರೆ.
ಇದು ಮದ್ಯಮದಿಂದ ದೊಡ್ಡ ಪ್ರಮಾಣದ ಮರ.ಅಂದಾಜು ೧೨೦ ಅಡಿಗಳ ವರೇಗೂ ಬೆಳೆಯುತ್ತದೆ.ಎಲೆಗಳು ದ್ವಿಲತಾ ಸಂಯುಕ್ತ ಪರ್ಣಿಗಳು(Bi-Pinnate).ತೊಗಟೆ ನಯವಾಗಿದ್ದು,ಅಸಮಾನ ಹೊಪ್ಪಳಿಕೆಗಳಾಗಿ ಕಳಚುವುದು.ದಾರುವು ಅತಿ ಗಡಸು,ಕಂದುಕೆಂಪು ಬಣ್ಣ.ಬಲಯುತವಾಗಿ ಬಹಳ ಕಾಲ ಬಾಳಿಕೆ ಬರುತ್ತದೆ.
ಇದರ ಚೌಬೀನೆಯನ್ನು ಗೃಹ ನಿರ್ಮಾಣದಲ್ಲಿ ಬಳಸುತ್ತಾರೆ.ಇದರ ಸೌದೆ,ಇದ್ದಿಲುಕೂಡಾ ಉತ್ತಮ ದರ್ಜೆಯದಾಗಿದ್ದು,ಕಬ್ಬಿಣದ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ.ಇದರ ಚಕ್ಕೆಯು ಜಂತುನಾಶಕ.
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
ಜಂಬೆ(Xylia Xylocarpa)ಭಾರತ,ಮ್ಯಾನ್ಮಾರ್,ಕಾಂಬೋಡಿಯಾಮತ್ತು ಥೈಲ್ಯಾಂಡ್ ದೇಶಗಳಲ್ಲಿ ವ್ಯಾಪನೆ ಇರುವ ಮರ.ಕರ್ನಾಟಕದಲ್ಲಿ ಪರ್ಣಪಾತಿಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.